ಬೆಂಗಳೂರಿನ ಸೇವಾವಸತಿಗಳ (ಸ್ಲಂ) ಅರ್ಚಕರ ತರಬೇತಿ ಶಿಬಿರ ಸೆ. 24 ರಿಂದ 26ರ ತನಕ 3 ದಿನಗಳ ಕಾಲ ನಡೆಯಿತು.
ರಾಷ್ಟ್ರೋತ್ಥಾನ ಪರಿಷತ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಕೆಂಗೇರಿಯ ಓಂಕಾರಾಶ್ರಮದ ಶ್ರೀ ಮಧುಸೂದಾನಂದ ಸ್ವಾಮಿಜೀ ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್, ವಿಹಿಂಪನ ಧರ್ಮ ಪ್ರಸಾರ ಪ್ರಮಖ್ ಕೃಷ್ಣಮೂರ್ತಿ, ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಆಡಳಿತ ಮಂಡಳಿ ಸದಸ್ಯ ರವಿಕುಮಾರ್ ಅವರು ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು.





