Bengaluru, Dec. 5: In the divine presence of His Holiness Jagadguru Sri Sri Shivarathri Deshikendra Mahaswamiji of Sri Suttur Math, Mysuru, Jayadeva Memorial Rashtrotthana Hospital & Research Centre was inaugurated herein Rajarajeshwari Nagar. Founder of Infosys Foundation and Chairman of Murthy Foundation, Smt. Sudha Murthy, Founder and Chairman of Narayana Health, Dr. Devi Prasad Shetty,
ಬೆಂಗಳೂರು, ನ.27: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ ರಾಷ್ಟ್ರೋತ್ಥಾನ ಸೇವಾವಸತಿ ಪ್ರಕಲ್ಪದ ಮಹಿಳಾ ಸ್ವಸಹಾಯ ಸಂಘಗಳ ಒಂದು ದಿನದ ವಿಶೇಷ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಮಾವೇಶದಲ್ಲಿ 81 ಮಹಿಳಾ ಸ್ವಸಹಾಯ ಸಂಘಗಳ 696 ಸದಸ್ಯರು ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ಶ್ರೀ ನಾ. ದಿನೇಶ್ ಹೆಗ್ಡೆ ಮತ್ತು ಆಡಳಿತ ಮಂಡಳಿ ಸದಸ್ಯರಾದ ಶ್ರೀ ರವಿಕುಮಾರ್ ಉಪಸ್ಥಿತರಿದ್ದರು. ಶ್ರೀ ನಾ. ದಿನೇಶ್ ಹೆಗ್ಡೆಯವರು ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಶಕ್ತರಾಗುವ ಅಗತ್ಯತೆಯ ಬಗ್ಗೆ ಮಾರ್ಗದರ್ಶನ
ಸಾವಿರಸಲ ಬಿಚ್ಚಿಟ್ಟು ಆಸ್ವಾದಿಸಬಹುದಾದ ಏಕೈಕ ಉಡುಗೊರೆಯೆಂದರೆ ಪುಸ್ತಕ ಮಾತ್ರ: ಉತ್ತಮ ಗ್ರಂಥವೊಂದರ ನಾಶ ವಿಚಾರವಂತಿಕೆಯ ಅವಸಾನ: ಸ್ವಾಮಿ ವೀರೇಶಾನಂದಜಿ ಮಹರಾಜ್: ಕನ್ನಡ ಪುಸ್ತಕ ಹಬ್ಬ ಸಮಾರೋಪದಲ್ಲಿ ಆಶೀರ್ವಚನ ಬೆಂಗಳೂರು, ನ.27: ಬುದ್ದಿ-ಭಾವಗಳ ಧನಾತ್ಮಕ ಬೆಳವಣಿಗೆಗೆ ಓದು ಬೆಂಬಲ ನೀಡುತ್ತದೆ. ಸಕಾರಾತ್ಮಕ ವಸ್ತು-ವಿಷಯಗಳನ್ನು ತೆರೆದಿಡುವ ಪುಸ್ತಕದ ಓದು ವ್ಯಕ್ತಿತ್ವ ರೂಪಿಸುತ್ತದೆ. ಇಂತಹ ಸದಾಶಯದ ಸಮಾಜ ನಿರ್ಮಾಣಕ್ಕೆ ಅಡಿಗಲ್ಲಾಗಿ ರಾಷ್ಟ್ರೋತ್ಥಾನ ಪರಿಷತ್ತಿನ ಪುಸ್ತಕ-ಸಾಹಿತ್ಯ ದೌತ್ಯ ಕನ್ನಡ ಸಾರಸ್ವತ ಲೋಕದ ಮಹಾನ್ ಕೊಡುಗೆಗಳಲ್ಲಿ ಒಂದು ಎಂದು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಪೂಜ್ಯ
Ku. Spandana, 9th Std Student in Rashtrotthana Vidyalaya Holehonnuru secured First Place for ‘Application of Spectrum of Light’ presentation in All India Maths-Science Fest, Bhopal, Madhya Pradesh. The Fest was organised by All India Shiksha Samsthan of Vidyabharati from this Nov 2nd to 6th. Congratulations from Rashtrotthana Family and best wishes for the future endeavors.
ಪ್ರಕೃತಿಯೊಂದಿಗೆ ಪ್ರಕೃತಿಯಾಗಿ ಬದುಕುವುದು ಸುಂದರ ಬದುಕಿನ ಧ್ಯೇಯ ಎಂಬುದು ಮಹರ್ಷಿ ಅರವಿಂದರ ಸಂದೇಶ: ಶ್ರೀ ಪುಟ್ಟು ಕುಲಕರ್ಣಿ ಬೆಂಗಳೂರು, ನ.6: ರಾಷ್ಟ್ರ ಪ್ರಕೃತಿಯಾದರೆ, ದೇಶ ಸಂಸ್ಕೃತಿ. ಮಹರ್ಷಿ ಶ್ರೀ ಅರವಿಂದರು ಇವೆರಡರ ಸಮ್ಮಿಲನದ ಭಾರತ ಕಟ್ಟಲು ಕನಸುಕಂಡವರು ಎಂದು ಅರಬಿಂದೋ ಸೊಸೈಟಿಯ ಅಖಿಲ ಭಾರತ ಪತ್ರಿಕೆಯ ಸಂಪಾದಕ ಶ್ರೀ ಪುಟ್ಟು ಕುಲಕರ್ಣಿ ಅಭಿಪ್ರಾಯಪಟ್ಟರು. ಇಲ್ಲಿನ ಕೇಶವ ಶಿಲ್ಪದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯವು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಹಬ್ಬ- 2022 ಕಾರ್ಯಕ್ರಮದ ಅಂಗವಾಗಿ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ಬಹುಆಯಾಮಗಳ ಕೊಡುಗೆಗಳ ಬಗೆಗೆ ಹೆಚ್ಚಿನ ಪ್ರಚಾರ ಅಗತ್ಯವಿದೆ: ಶ್ರೀ ದು. ಗು. ಲಕ್ಷ್ಮಣರಾಷ್ಟ್ರೋತ್ಥಾನ ಪುಸ್ತಕ ಹಬ್ಬದ ಉಪನ್ಯಾಸದಲ್ಲಿ ಅಭಿಮತ ಬೆಂಗಳೂರು, ನ.6: ಭಾರತದ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಇಂದಿನ ಸ್ವರೂಪ ರೂಪುಗೊಳ್ಳುವಲ್ಲಿ ಸಾವಿರಾರು ಅಪ್ರತಿಮ ವೀರ ಸಾಧಕರ ಸತತ ಪರಿಶ್ರಮ ಅಡಗಿದೆ. ಪ್ರಾಣ ನೆಲೆಗೊಳ್ಳಲು ವಾಯುವಿನ ಅಗತ್ಯವಿರುವಷ್ಟೇ, ಸ್ವಾತಂತ್ರ್ಯದ ಉಳಿಯುವಿಗೆ ಅದನ್ನು ನಮ್ಮಲ್ಲಿಗೆ ದಾಟಿಸಿದ ಮಹಾನ್ ಸಾಧಕರ ಬಲಿದಾನಗಳ ಸ್ಮರಣೆಯೂ ಅಷ್ಟೇ ಅಗತ್ಯ. ಈ ನಿಟ್ಟಿನಲ್ಲಿ ಸಮಗ್ರ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ
ರಾಷ್ಟ್ರೋತ್ಥಾನ ಸಾಹಿತ್ಯದ ಡಿಜಿಟಲ್ ಆವೃತ್ತಿ ಲೋಕಾರ್ಪಣೆ: ಡಾ. ವಿಜಯ ಸಂಕೇಶ್ವರರಿಂದ ಬೆಂಗಳೂರು, ನ.5: ಇಲ್ಲಿನ ಕಂಪೇಗೌಡನಗದ ರಾಷ್ಟ್ರೋತ್ಥಾನದಲ್ಲಿ ನಡೆಯುತ್ತಿರುವ ಕನ್ನಡ ಪುಸ್ತಕ ಹಬ್ಬದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟನೆಗಳ ಡಿಜಿಟಲ್ ಆವೃತ್ತಿಯನ್ನು (https://play.google.com/store/search?q=rashtrotthana%20sahitya&c=books) ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ವಿಜಯ ಸಂಕೇಶ್ವರ ಅವರು ಲೋಕಾರ್ಪಣೆ ಮಾಡಿದರು. ನಂತರದಲ್ಲಿ ಮಾತನಾಡುತ್ತಾ ಡಾ. ವಿಜಯ ಸಂಕೇಶ್ವರರು ನಿಜ ಪುಸ್ತಕ ಬೀರುವ ಪ್ರಭಾವ ಡಿಜಿಟಲ್ ಪುಸ್ತಕಗಳು ಉಂಟುಮಾಡುವುದಿಲ್ಲ ಎಂದು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಚಲನಚಿತ್ರಗಳು ಬಹುಭಾಷೆಯಲ್ಲಿ ಬರುತ್ತಿರುವಂತೆ ಪುಸ್ತಕಗಳೂ ಬೇರೆಬೇರೆ ಭಾಷೆಗಳಲ್ಲಿ,
ಕನ್ನಡ ಪುಸ್ತಕ ಹಬ್ಬದಲ್ಲಿ ಶ್ರೀ ರೋಹಿತ್ ಚಕ್ರತೀರ್ಥ ಅವರ ಉಪನ್ಯಾಸ ಬೆಂಗಳೂರು, ನ.5: ಖ್ಯಾತ ಅಂಕಣಕಾರರು ಹಾಗೂ ಲೇಖಕರಾದ ಶ್ರೀ ರೋಹಿತ್ ಚಕ್ರತೀರ್ಥ ಅವರು ಬ್ರಿಟಿಷ್ ಪೂರ್ವ ಭಾರತದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯದ ಮೇಲೆ ಉಪನ್ಯಾಸವನ್ನು ನಡೆಸಿಕೊಟ್ಟರು. ಸಾವಿರಾರು ವರ್ಷಗಳ ಹಿಂದೆಯೇ ಭಾರತವು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮಾಡಿತ್ತು. ಸಾವಿರ ವರ್ಷಗಳ ಆಕ್ರಮಣದಿಂದ ಹಾಗೂ ಹಲವಾರು ಕಾರಣಗಳಿಂದ ನಾವು ಅದನ್ನು ನಿರ್ಲಕ್ಷಿಸಿದ್ದೇವೆ. ನಮ್ಮ ಜ್ಞಾನವನ್ನೇ ಪಡೆದು, ಅಭಿವೃದ್ಧಿಪಡಿಸಿ ತಮ್ಮದೆಂದು ಹೇಳಿದ್ದಾರೆ ಹಲವು ಆಧುನಿಕ ವಿಜ್ಞಾನಿಗಳು.
2022ರ ಸಾಲಿನಲ್ಲಿ IIT ಹಾಗೂ NIT ಪ್ರವೇಶಿಸಿದ ತಪಸ್ ವಿದ್ಯಾರ್ಥಿಗಳಿಗೆ ಶುಭಾಶಯಗಳು ತಪಸ್ – ಸಾಧನಾಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಗಂಡು ಮಕ್ಕಳಿಗೆ PUC ಶಿಕ್ಷಣ ಹಾಗೂ IIT-JEE ತರಬೇತಿ ಉಚಿತವಾಗಿ ಪಡೆಯಲು ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ PUC ಶಿಕ್ಷಣ ಹಾಗೂ NEET ತರಬೇತಿ ಅಥವಾ Integrated BSc-BEd ಶಿಕ್ಷಣ ಉಚಿತವಾಗಿ ಪಡೆಯಲು ಸುವರ್ಣಾವಕಾಶ. 2022-24ರ ಪ್ರವೇಶಾತಿಗೆ ಇದೇ ಡಿಸೆಂಬರ್ 10ರ ಒಳಗೆ ಆನ್ಲೈನ್ನಲ್ಲಿ ಅರ್ಜಿಯನ್ನು ತುಂಬಬೇಕು. ನಿಮ್ಮ ನೆರೆಹೊರೆಯ ಅರ್ಹ ಪ್ರತಿಭಾವಂತ ಮಕ್ಕಳಿಗೆ
ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ- 2022ರ ಸಂವಾದದಲ್ಲಿ ಬೆಂಗಳೂರು, ಅ.30: ಸುಧೀರ್ಘವಾದ ಮಾನವ ಜೀವನ ಪ್ರವಾಹವನ್ನು ಹಳತು-ಹೊಸತೆಂದು ವಿಭಜಿಸುವುದು ಸಾಧುವಲ್ಲ. ಚಿಂತನ-ಮಂಥನಗಳೊಂದಿಗೆ ನಿನ್ನೆಯ ಅನುಭವದ ಆಧಾರದ ಹಿನ್ನೆಲೆಯಲ್ಲಿ ಇಂದಿನ ಜೀವನ ರೂಪಿಸುವುದು ಸರ್ವವಿದಿತವಾದುದು ಎಂದು ಹಿರಿಯ ಚಿಂತಕ, ಲೇಖಕ ವಿದ್ವಾನ್ ಜಗದೀಶ ಶರ್ಮಾ ತಿಳಿಸಿದರು.ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಹಬ್ಬ- 2022ರ ಎರಡನೇ ದಿನವಾದ ಭಾನುವಾರ ಸಂಜೆ ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಹಳೆಬೇರು-ಹೊಸಚಿಗುರು’ ಸಂವಾದದಲ್ಲಿ ಅವರು