ರಾಷ್ಟ್ರೋತ್ಥಾನ ಪರಿಷತ್ ದೊಡ್ಡಬಳ್ಳಾಪುರದ ಘಾಟಿಸುಬ್ರಹ್ಮಣ್ಯದಲ್ಲಿ ಆಯೋಜಿಸಿದ ‘ಬೃಂದಾವನ – ಕೃಷಿ ಅರಣ್ಯ ಯೋಜನೆ’ಯ ಸಸಿ ನೆಡುವ ಸಪ್ತಾಹ ಕಾರ್ಯಕ್ರಮದಲ್ಲಿ ಇಂದು (3ನೇ ದಿನ) ಪಬ್ಲಿಕ್ ಟಿವಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಚ್.ಆರ್. ರಂಗನಾಥ್ ಅವರು ಆಗಮಿಸಿ ಸಸಿ ನೆಟ್ಟರು. ರಾಷ್ಟ್ರೋತ್ಥಾನ ಪರಿಷತ್ ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಆರೆಸ್ಸೆಸ್ ನ ಪ್ರಚಾರ ವಿಭಾಗದ ರಾಧಾಕೃಷ್ಣ ಹೊಳ್ಳ ಅವರು ಉಪಸ್ಥಿತರಿದ್ದರು.


